Monthly Archives: September 2021

ಅಭಿಯಂತರ ದಿನಾಚರಣೆ – ೨೦೨೧

 

ಒಮ್ಮೆ ಸರ್ ವಿಠಲದಾಸ್ ಥ್ಯಾಕರ್ಸ್ ಅವರ ತಮ್ಮನವರು  ಕಾರ್ಯನಿಮ್ಮಿತ್ತ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹಾಗಾಗಿ  ಅವರನ್ನು ನೋಡಿಕೊಳ್ಳಬೇಕೆಂದು, ಅವರಿಗೆ ಒಂದು ಬಂಗಲೆಯಲ್ಲಿ ವಸತಿಗೆ ವ್ಯವಸ್ಥೆ ಮಾಡಬೇಕೆಂದು ಲೇಡಿ ಥ್ಯಾಕರ್ಸ್ ಅವರು ಅವರ ಆತ್ಮೀಯರಾದ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಪತ್ರವನ್ನು ಬರೆಯುತ್ತಾರೆ. ವಿಶ್ವೇಶ್ವರಯ್ಯನವರು ಮೊದಲೇ ಮೈಸೂರಿನ ದಿವಾನರಾದವರು ಹಾಗಾಗಿ ಅವರನ್ನು  ಅತ್ಯಂತ ಕಾಳಜಿಯಿಂದ   ಸರ್ ವಿಠಲದಾಸ್ ಥ್ಯಾಕರ್ಸ್  ಅವರ ತಮ್ಮನವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವರನ್ನು ಪುಣೆಗೆ ಬೀಳ್ಕೊಡುತ್ತಾರೆ. ಲೇಡಿ  ಥ್ಯಾಕರ್ಸ್ಆ ಅವರು ವಿಶ್ವೇಶ್ವರಯ್ಯನವರ ಕೈಯ್ಯಲ್ಲಿ ಸರ್ಕಾರವೇ ಇದೆ ಹಾಗಾಗಿ ಯಾವುದು ಒಂದು ಸರ್ಕಾರದ ಬಂಗಲೆ ಒದಗಿಸಿರುತ್ತಾರೆ ಎಂದು ಕೊಂಡು ಸುಮ್ಮನಾಗಿದ್ದರು. ಆದರೆ ಹಲವು ವರ್ಷಗಳ ನಂತರ ಅವರಿಗೆ ತಿಳಿಯಿತು. ಸರ್ಕಾರೀ ಬಂಗಲೆಯನ್ನು ಸಹ ಬಾಡಿಗೆಗೆ ತಗೆದುಕೊಂಡು, ಆ ಬಾಡಿಗೆಯನ್ನು ಸಹ ತಮ್ಮ ಕೈಯಿಂದ ಕೊಟ್ಟಿದ್ದರೆಂಬ ಸಂಗತಿ. 

ನಾವು ಅಧಿಕಾರದಲ್ಲಿರುವ  ಹಲವಾರು ವರ್ಗಗಳನ್ನು ನೋಡಿರ್ತೀವಿ, ಅವರಲ್ಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿರೋವವರೇ ಹೆಚ್ಚನ್ನು ಸಾಕ್ಷಾತ್ಕರಿಸಿರುತ್ತೇವೆ, ನಾವು ಸಹ ಕೆಲವೊಂದು ಕಡೆನೂ ಎಡುವಿರುತ್ತೇವೆ. ಇಂದು ಸೆಪ್ಟೆಂಬರ್ ೧೫ ಸರ್ ಎಂ ವಿ ಅವರ ಜನ್ಮ ದಿನ ನಾವೆಲ್ಲ ಅಂದರೆ ಭಾರತೀಯರು ‘ಅಭಿಯಂತರ ದಿನಾಚರಣೆ’  ಅಂತ ಆಚರಿಸುತ್ತೇವೆ . ಇಂದಾದರೂ ಇಲ್ಲವೇ ಮುಂದಾದರೂ ಸರ್ ಎಂ ವಿಶ್ವೇಶ್ವರಯ್ಯನವರು ಆದರ್ಶಗಳನ್ನು ಸ್ವಲ್ಪನಾದರೂ ಪಾಲನೆಮಾಡೋಣ.

ಲೇಡಿ ಥಾಕರ್ಸ್ ಅವರ ಬಗೆಗಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಸ್ಪರ್ಶಿಸಿ 

https://en.wikipedia.org/wiki/Vithaldas_Thackersey

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html